ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿಗಳಿಂದ ಹಣ ವಸೂಲಿ: ನಕಲಿ ಪೊಲೀಸ್‌ನ ಬಂಧನ

Last Updated 29 ಸೆಪ್ಟೆಂಬರ್ 2020, 6:39 IST
ಅಕ್ಷರ ಗಾತ್ರ

ಬೆಟ್ಟದಪುರ: ಐಜಿ ಸ್ಕ್ವಾಡ್ ಪೊಲೀಸ್ ಎಂದು ಹೇಳಿ ಬೆಟ್ಟದಪುರ - ಕುಶಾಲನಗರ ಮುಖ್ಯರಸ್ತೆಯಲ್ಲಿ ಕ್ರಷರ್‌ನಿಂದ ಬೋರ್ಡ್ಸ್ ಕಲ್ಲುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಗಳನ್ನು ಅಡ್ಡಗಟ್ಟಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಕಾರ್ಲೆಕೊಪ್ಪಲು ಗ್ರಾಮದ ಕೆ.ವಿ. ಶಶಿಧರ್ ಬಂಧಿತ ಆರೋಪಿ.

ಈತ ಮುಖ್ಯ ರಸ್ತೆಯಲ್ಲಿ ಓಡಾಡುವ ಲಾರಿಗಳನ್ನು ಅಡ್ಡಗಟ್ಟಿ ಲಾರಿಯ ದಾಖಲಾತಿಹಾಗೂ ಪರ್ಮಿಟ್ ತೋರಿಸಿ ಎಂದು ಕೇಳುತ್ತಿದ್ದ, ದಾಖಲೆಗಳು ಸರಿ ಇದ್ದರೆ ಲಾರಿಯಲ್ಲಿ ಓವರ್ ಲೋಡ್ ಇದೆ ಎಂದು ಹೇಳಿ ಹೆದರಿಸಿ ಹಣವನ್ನು ಕೇಳುತ್ತಿದ್ದರು ಎಂದು ಲಾರಿಯ ಚಾಲಕ ಮಂಜು ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಿಪಿಐ ಪ್ರದೀಪ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಿಎಸ್ಐ ಪುಟ್ಟರಾಜು, ಎಎಸ್ಐ ನಟರಾಜ್, ಸಿಬ್ಬಂದಿ ದಿಲೀಪ್, ಬಸವರಾಜು, ರಘು ಕಾರ್ಯಾಚರಣೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT