ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆಯಿದ್ದೂ ವಂಚಿತರು

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಬ್ರಾಹ್ಮಣರಿಗೂ ಟಿಕೆಟ್ ಕೊಡಿ’ ಶೀರ್ಷಿಕೆಯಡಿ ಉಡುಪಿಯ ಪೇಜಾವರ ಸ್ವಾಮೀಜಿ ಒತ್ತಾಯದ ವಿಷಯ ಪ್ರಕಟಪಡಿಸಿ (ಪ್ರ.ವಾ., ಏ.2) ಪತ್ರಿಕೆಯು ಮಹದುಪಕಾರ ಮಾಡಿದೆ. ಇಂದು ನಿಜವಾಗಿ ಪ್ರತಿಭೆಯಿದ್ದರೂ ಅವಕಾಶದ ಕೊರತೆಯಿಂದ ಅತಿ ಹಿಂದುಳಿದವರಾಗಿ ಇರುವವರು ನಮ್ಮ ರಾಜ್ಯದಲ್ಲಿ ಬ್ರಾಹ್ಮಣರೇ ಎಂದರೆ ತಪ್ಪಾಗಲಾರದು. ಅವರು ತಳ್ಳಲ್ಪಟ್ಟವರಾಗಿದ್ದಾರೆ. ಇದು ಅಕ್ಷರಶಃ ಸತ್ಯ.

ಬ್ರಾಹ್ಮಣರು ಬಹುಜನಪ್ರಿಯರು ಎಂಬ ಪ್ರಶಂಸೆಗೆ ಒಳಗಾಗಿದ್ದರೂ ಅದು ಅವರಿಗೆ ಸಹಾಯಕವಾಗಿಲ್ಲ. ಕೆಲವು ಬುದ್ಧಿಜೀವಿಗಳಿಗೆ ಬ್ರಾಹ್ಮಣರನ್ನು ಅನವಶ್ಯಕವಾಗಿ ನಿಂದನೆ ಮಾಡುವುದೆಂದರೆ ಏನೋ ಒಂದು ಬಗೆಯ ಆನಂದ. ಬ್ರಾಹ್ಮಣರು ಶಾಂತಿಪ್ರಿಯರು. ಬೇರೆಯವರು ಅನವಶ್ಯಕವಾಗಿ ಟೀಕಿಸಿದರೂ ಅವರು ಅದನ್ನು ತೀವ್ರವಾಗಿ ಪರಿಗಣಿಸುವುದಿಲ್ಲ. ಬ್ರಾಹ್ಮಣರಲ್ಲಿ ಸಂಘಟನಾಶಕ್ತಿ ಕಡಿಮೆಯಿರುವುದೂ ಒಂದು ವಿಧದಲ್ಲಿ ದೌರ್ಬಲ್ಯವೇ ಸರಿ. ಶಾಸನ ಸಭೆಯಲ್ಲಿ ಈ ಸಮುದಾಯದ ಪ್ರಾತಿನಿಧ್ಯ ಗಣನೀಯವಾಗಿ ಹೆಚ್ಚುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT