‘ಬ್ರಾಹ್ಮಣರಿಗೂ ಟಿಕೆಟ್ ಕೊಡಿ’ ಶೀರ್ಷಿಕೆಯಡಿ ಉಡುಪಿಯ ಪೇಜಾವರ ಸ್ವಾಮೀಜಿ ಒತ್ತಾಯದ ವಿಷಯ ಪ್ರಕಟಪಡಿಸಿ (ಪ್ರ.ವಾ., ಏ.2) ಪತ್ರಿಕೆಯು ಮಹದುಪಕಾರ ಮಾಡಿದೆ. ಇಂದು ನಿಜವಾಗಿ ಪ್ರತಿಭೆಯಿದ್ದರೂ ಅವಕಾಶದ ಕೊರತೆಯಿಂದ ಅತಿ ಹಿಂದುಳಿದವರಾಗಿ ಇರುವವರು ನಮ್ಮ ರಾಜ್ಯದಲ್ಲಿ ಬ್ರಾಹ್ಮಣರೇ ಎಂದರೆ ತಪ್ಪಾಗಲಾರದು. ಅವರು ತಳ್ಳಲ್ಪಟ್ಟವರಾಗಿದ್ದಾರೆ. ಇದು ಅಕ್ಷರಶಃ ಸತ್ಯ.