ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ವಾಣಿ ವಿಲಾಸ ಮಾರುಕಟ್ಟೆ ಅಲ್ಲದೆ, ಅಗ್ರಹಾರ, ನಂಜುಮಳಿಗೆ, ಬಲ್ಲಾಳ್ ಸರ್ಕಲ್ ಒಳಗೊಂಡಂತೆ ನಗರದ ವಿವಿಧೆಡೆ ಜನರು ಖರೀದಿಗೆ ಮುಗಿಬಿದ್ದರು. ರಸ್ತೆ ಬದಿಗಳಲ್ಲೂ ವ್ಯಾಪಾರ ಜೋರಾಗಿ ನಡೆಯಿತು. ಅಂಗಡಿಗಳ ಮುಂದೆ ಜನದಟ್ಟಣೆ ಹೆಚ್ಚಾಗಿತ್ತು. ಖರೀದಿಯ ಭರಾಟೆಯಲ್ಲಿ ಹಲವರು ಅಂತರ ಮರೆತರು.