ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಡಿಎಫ್ಒ ಮರಿಯಾ ಕ್ರಿಸ್ತರಾಜ್ ಕಾರ್ಯಚರಣೆಯ ತಂತ್ರವನ್ನು ಬದಲಾಯಿಸಲು ಸೂಚಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಳ್ಳಲು ಮಾರ್ಗದರ್ಶನ ನೀಡಿದ್ದಾರೆ. ತಮ್ಮ ಕಚೇರಿಯನ್ನೇ ಕೊಟ್ಟಗೇರಿ ಕಾಫಿ ತೋಟಕ್ಕೆ ಬದಲಾಯಿಸಿಕೊಂಡಂತಿರುವ ತಿತಿಮತಿ ಎಸಿಎಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್ ಆಂಟೋನಿ, ಆರ್ಎಫ್ಒಗಳಾದ ಅಶೋಕ್ ಹುನುಗುಂದ, ಕಿರಣ್ ಕುಮಾರ್, ಗಂಗಾಧರ್, ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮಜೀದ್ ಖಾನ್, ತಜ್ಞ ವೆಂಕಟೇಶ್ ಕಾರ್ಯಾಚರಣೆ ಸಫಲಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಕಾರ್ಯಾಚರಣೆ ತಂಡಕ್ಕೆ ಸ್ಥಳೀಯವಾಗಿ ಮಾಪಂಗಡ ಅಜಯ್, ಮಾಪಂಗಡ ಸಜನ್ ದೇವಯ್ಯ ಸಹಕಾರ ನೀಡುತ್ತಿದ್ದಾರೆ.