‘ಜಾಗ್ರಸ್ವಪ್ನಸುಷುಪ್ತಿಯಲ್ಲಿ ಮತ್ತೊಂದ ನೆನೆದಡೆ ತಲೆದಂಡ ತಲೆದಂಡ! ಹುಸಿಯಾದಡೆ ದೇವಾ ತಲೆದಂಡ ತಲೆದಂಡ! ಕೂಡಲಸಂಗಮದೇವಾ ನೀವಲ್ಲದೆ ಅನ್ಯವ ನೆನೆದಡೆ ತಲೆದಂಡ ತಲೆದಂಡ!’ ಎಂದು ಬಸವಣ್ಣ ಹೇಳುತ್ತಾರೆ. ಜಾಗೃತ ಮತ್ತು ನಿದ್ದೆಯಲ್ಲಿ ಅವರು ಕೂಡಲಸಂಗಮನನ್ನು ನೆನೆಯುತ್ತಾರೆ. ಆದರೆ, ನಾವು ಜಾಗೃತಿ ಇದ್ದಾಗಲೂ ನೆನೆಯುವುದಿಲ್ಲ. ನಿದ್ದೆಯಲ್ಲಿದ್ದಾಗಲೂ ನೆನೆಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.