‘ಭೋಗೇಶ್ವರ ನೀ ಅಮರ’ ಎಂಬ ಸಾಲು ಬರೆದ ಅನ್ನಸಂತರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ವೈರಲ್ ಆಗಿದೆ. ‘ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಕಾಣಸಿಗುತಿದ್ದ ‘ಭೋಗೇಶ್ವರ’ ಆನೆ ಮೃತಪಟ್ಟ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ. ವನ್ಯಜೀವಿಪ್ರಿಯರು, ಸಾರ್ವಜ ನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿ ಸಬೇಕು’ ಎಂದು ತಾಲ್ಲೂಕಿನ ರೋಟರಿ ಕ್ಲಬ್
ಅಧ್ಯಕ್ಷ ಕೆ.ಎಂ. ಮಹೇಶ್ ತಿಳಿಸಿದ್ದಾರೆ.