ಜನ್ಮದಿನದ ಪ್ರಯುಕ್ತ ಇವರು ಉತ್ತನಹಳ್ಳಿ ಬಳಿಯ ಸಮುದಾಯ ಭವನವೊಂದರಲ್ಲಿ ಸುಮಾರು 50 ಮಂದಿಗೆ ಔತಣಕೂಟ ಏರ್ಪಡಿಸಿದ್ದರು. ನಂತರ 6 ಮಂದಿಯೊಂದಿಗೆ ಅಪಾರ್ಟ್ಮೆಂಟ್ಗೆ ಬಂದಿದ್ದರು. ಮದ್ಯ ಸೇವಿಸುತ್ತಿದ್ದಾಗ ಇವರಲ್ಲಿ ಗಲಾಟೆ ಉಂಟಾಗಿ ಮದ್ಯದ ಬಾಟಲಿಗಳಿಂದ ತಲೆ, ಎದೆ ಭಾಗಕ್ಕೆ ಹೊಡೆದು ಕೊಲೆ ಮಾಡಲಾಗಿದೆ. ಆರೋಪಿಗಳಿಗಾಗಿ ಶೋಧಕಾರ್ಯ ನಡೆದಿದೆ ಎಂದು ಡಿಸಿಪಿ ಪ್ರಕಾಶ್ ಗೌಡ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.