ಸಚಿವೆ ವಜಾಗೊಳಿಸಿ: ‘ಪರವಾನಗಿ ಇಲ್ಲದೆ ರೆಸ್ಟೊರೆಂಟ್ ನಡೆಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಝೋಯಿಶ್ಇರಾನಿ ವಿರುದ್ಧ ಕ್ರಮಕ್ಕೆ ಮುಂದಾದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ, ಅಮಾನತು ಮಾಡಲಾಗಿದೆ. ಗೋ ಹತ್ಯೆ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು, ಹೋಟೆಲ್ನಲ್ಲಿ ಕೊಡಲಾಗುತ್ತಿದ್ದ ಗೋಮಾಂಸದ ಬಗ್ಗೆ ಹೇಳಿಕೆ ನೀಡಲಿ. ಪ್ರಧಾನಿ ನರೇಂದ್ರ ಮೋದಿ ಕೂಡಲೇ ಸಂಪುಟದಿಂದ ಸ್ಮೃತಿ ಇರಾನಿ ಅವರನ್ನು ಕೈಬಿಡಬೇಕು’ ಎಂದು ಲಕ್ಷ್ಮಣ ಒತ್ತಾಯಿಸಿದರು.