ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿ ‘ನಮ್ಮ ಇತಿಹಾಸದಲ್ಲಿ ಸತ್ಯಾಂಶವಿಲ್ಲ. ಪ್ರಭುತ್ವದ ಹೊಗಳಿಕೆ, ವಿಜೃಂಭಣೆಯೇ ಹೆಚ್ಚಿದೆ. ಸತ್ಯದ ಹೊಳಹುವಿನ ದಾರಿ ಹಿಡಿದು, ಹುಡುಕಿದಾಗ ಮಾತ್ರ ಇತಿಹಾಸದ ನೈಜ ಚಿತ್ರಣ ಹೊರಬೀಳಲಿದೆ. ಚರಿತ್ರೆ ಎಂಬುದು ಒಂದು ದೃಷ್ಟಿಕೋನದ ಅಧ್ಯಯನವಲ್ಲ. ಅಂತರಶಿಸ್ತೀಯ, ಬಹು ಆಯಾಮದ ಅಧ್ಯಯನ’ ಎಂದು ಹೇಳಿದರು.