ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‪ಕೊರೊನಾ ಕತ್ತಲೆಯಲ್ಲಿ ಆಟ-ಪಾಠದ ಬೆಳಕು’

ಬಿ.ವೈ.ವಿಜಯೇಂದ್ರ ಸಾಂಸ್ಕೃತಿಕ ಬಳಗದಿಂದ ಮಕ್ಕಳಿಗೆ ಪುಸ್ತಕ-ಆಟಿಕೆಗಳ ವಿತರಣೆ
Last Updated 19 ಏಪ್ರಿಲ್ 2020, 14:32 IST
ಅಕ್ಷರ ಗಾತ್ರ

ಮೈಸೂರು: ಬಿ.ವೈ.ವಿಜಯೇಂದ್ರ ಸಾಂಸ್ಕೃತಿಕ ಬಳಗದ ವತಿಯಿಂದ ‘ಕೊರೊನಾ ಕತ್ತಲೆಯಲ್ಲಿ ಆಟ ಪಾಠದ-ಬೆಳಕು’ ಎಂಬ ಕಾರ್ಯಕ್ರಮಕ್ಕೆ ಭಾನುವಾರ ನಗರದ ಮೇದರಗೇರಿಯಲ್ಲಿ ಚಾಲನೆ ನೀಡಲಾಯಿತು.

ಮಕ್ಕಳಿಗೆ ಪುಸ್ತಕ, ಆಟಿಕೆಗಳನ್ನು ವಿತರಿಸಿ‬ ‪ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ನಂದೀಶ್ ಹಂಚ್ಯಾ ಮಾತನಾಡಿ, ‘ಲಾಕ್‌ಡೌನ್‌ನಿಂದ ಅಪಾರ ಮಕ್ಕಳು ಸಾಮಾಜಿಕ ಸಂಪರ್ಕವಿಲ್ಲದೆ ಖಿನ್ನತೆಗೊಳಗಾಗುವ ಆತಂಕ ಎದುರಿಸುತ್ತಿರುವ ಹೊತ್ತಲ್ಲಿ ಸಾಂಸ್ಕೃತಿಕ ಬಳಗ ಮಾದರಿಯ ಕಾರ್ಯಕ್ರಮ ಆಯೋಜಿಸಿದೆ. ಇದು ಎಲ್ಲರಿಗೂ ಅನುಕರಣೀಯ’ ಎಂದರು.‬

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಆರ್.ರಘು(ಕೌಟಿಲ್ಯ) ಮಾತನಾಡಿ, ‘ಬಡ–ಮಧ್ಯಮ ವರ್ಗದ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಲು ಉದ್ದೇಶಿಸಲಾಗಿದೆ’ ಎಂದರು.

ಮಹಾನಗರ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಆಲನಹಳ್ಳಿ ಮಹದೇವ ಸ್ವಾಮಿ,‬ ‪ವಕೀಲ ಮಾರ್ಬಳ್ಳಿ ಮೂರ್ತಿ, ಜಿ.ಗೋಪಾಲ‬, ವಿಕ್ರಮ ಅಯ್ಯಂಗಾರ್, ಅಪೂರ್ವ ಸುರೇಶ್, ಸುಚೀಂದ್ರ, ಶ್ರೀನಿವಾಸಪ್ರಸಾದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT