ಚುನಾವಣಾ ಆಯೋಗದ ಬಗ್ಗೆ ಭರವಸೆ ಇದೆ. ಆದರೆ, ಒಂದು ಮತಕ್ಕೆ ₹ 2 ಸಾವಿರ ಹಣ ಹಂಚಲಾಗುತ್ತಿದೆ ಎಂಬ ಸುದ್ದಿಯೂ ಇದೆ. ವಿಜಯೇಂದ್ರ ಅವರೇ ಅಲ್ಲಿ ಮೊಕ್ಕಾಂ ಹೂಡಿದ್ದಾರೆ. ಹೆಚ್ಚು ದರ ನೀಡಿ ಖರೀದಿಸಿದ ವೆಂಟಿಲೇಟರ್ನ ಹಣದ ಪ್ರಭಾವವನ್ನು ಅಲ್ಲಿ ಕಾಣಬಹುದು ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.