ಮೈಸೂರು: ಇಲ್ಲಿನ ಗೌಸಿಯಾನಗರದಲ್ಲಿ ಕದೀರ್ ಎಂಬುವರು ತಮ್ಮ ಭಾವನನ್ನೇ ಕೊಲೆ ಮಾಡಿ, ಕೈಗಳನ್ನು ಕತ್ತರಿಸಿ ಉದಯಗಿರಿ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾರೆ.
ಮಹಮದ್ ಸರಾನ್ (27) ಕೊಲೆಯಾದವರು.
ಕಳೆದ ಐದು ತಿಂಗಳ ಹಿಂದಷ್ಟೇ ಮಹಮ್ಮದ್ ಸರಾನ್ ಮತ್ತು ರೂಬೀನಾ ಅವರ ಮದುವೆಯಾಗಿತ್ತು. ಇಬ್ಬರ ನಡುವೆ ಕೌಟುಂಬಿಕ ಕಲಹ, ಜಗಳ ಉಂಟಾಗಿತ್ತು. ಹೀಗಾಗಿ, ಪೋಷಕರು ಬುದ್ಧಿವಾದ ಹೇಳಿದ್ದರು. ಆದರೂ ಇಬ್ಬರ ನಡುವೆ ಕಲಹ ನಿಂತಿರಲಿಲ್ಲ. ಹೀಗಾಗಿ, ಕದೀರ್ ಭಾವನನ್ನು ಕೊಲೆ ಮಾಡಿದ್ದಾರೆ.