‘ಈಗಿನ ಕುಲಪತಿ ಎಸ್.ವಿದ್ಯಾಶಂಕರ್ ತಮ್ಮ ಅವಧಿಯಲ್ಲಿನ ಆದಾಯ–ಖರ್ಚಿನ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚಳ ಮಾಡಿರುವ ಶುಲ್ಕ ಏರಿಕೆಯನ್ನು ವಾಪಸ್ ಪಡೆಯಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ವಿ.ವಿ.ಯ ಮುಂಭಾಗ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಲಾಗುವುದು’ ಎಂದು ಶಿವರಾಮು ಎಚ್ಚರಿಕೆ ನೀಡಿದರು.