ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು- ದೇವನೂರು ರಸ್ತೆಯಲ್ಲಿ ಮಂಗಳವಾರ ಒಕ್ಕಣೆಗಾಗಿ ಹಾಕಲಾಗಿದ್ದ ಹುರುಳಿ ಚಲಿಸುತ್ತಿದ್ದ ಕಾರಿಗೆ ಸಿಲುಕಿ ಕಾರು ಸುಟ್ಟು ಹೋಗಿದೆ.
ಹುರುಳಿಯ ಕಡ್ಡಿ, ಹುಲ್ಲು ಕಾರಿಗೆ ಸಿಲುಕಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಕಾರು ನಿಲ್ಲಿಸಿ ಒಳಗಿದ್ದವರೆಲ್ಲ ಹೊರಗೆ ಬರುತ್ತಿದ್ದಂತೆ ಇಡೀ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.