ಬೆಂಗಳೂರಿನ ಚಾಮರಾಜಪೇಟೆಯ ‘ಮಕ್ಕಳ ಕೂಟ’ಕ್ಕೆ ಮೊನ್ನೆ ನಾನು ನನ್ನ ಎರಡು ವರ್ಷದ ಮಗನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿನ ಉದ್ಯಾನದ ಸ್ಥಿತಿ ನೋಡಿ ಗಾಬರಿ ಆಯಿತು. ಅಲ್ಲಿನ ಜೋಕಾಲಿಗಳಲ್ಲಿ ಒಂದೂ ಸುಸ್ಥಿತಿಯಲ್ಲಿ ಇರಲಿಲ್ಲ. ಅಲ್ಲೇ ಕಸದ ಗಾಡಿಗಳೂ ಇದ್ದದ್ದು ನೋಡಿ ಅಸಹ್ಯವಾಯಿತು. ಹಿರಿಯ ನಾಗರಿಕರಿಗಾಗಿ ಇರುವ ವ್ಯಾಯಾಮ ಉಪಕರಣಗಳ ಮೇಲೆ ಪುಂಡರು ಕೂತು ಹಾಳು ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿ ಮನಸ್ಸಿಗೆ ಬಹಳ ಬೇಸರವಾಯಿತು.