ಮೈಸೂರು: ಬೃಂದಾವನ ಬಡಾವಣೆಯಲ್ಲಿ ಮಹಿಳೆಯ ಸರಗಳವು ಮಾಡಿದ್ದ ಆರೋಪಿಯನ್ನು ವಿ.ವಿ.ಪುರಂ ಪೊಲೀಸರು 24 ಗಂಟೆಗೊಳಗೆ ಬಂಧಿಸಿದ್ದಾರೆ.
ಡಿ. 5ರ ಸಂಜೆ ಚಂದ್ರಕಲಾ ಎಂಬುವವರು ಮನೆಗೆ ನಡೆದು ಹೋಗುತ್ತಿದ್ದಾಗ ತಮಿಳುನಾಡಿನ ಗಾಜನೂರಿನ ಉಮೇಶ್ (28) ಎಂಬಾತ ಸರವನ್ನು ಕಿತ್ತು ಪರಾರಿಯಾಗಿದ್ದಾನೆ.
ಕದ್ದ ಸರವನ್ನು ಮಾರಾಟ ಮಾಡುವ ವೇಳೆ ಉಮೇಶ್ ಮರುದಿನವೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಖಚಿತ ಮಾಹಿತಿಯ ಮೇಲೆ ದಾಳಿ ಮಾಡಿದ ಪೊಲೀಸರು ಬಂಧಿತನಿಂದ 12 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.