ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಪ್ರತಿಕ್ರಿಯಿಸಿ, ‘ರಾಯಚೂರು, ಕಲಬುರಗಿ, ದಾವಣಗೆರೆ ಭಾಗಗಳಿಂದ ಕೋವಿಡ್ಗೂ ಮುಂಚಿತವಾಗಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸಿ ಬಂದು ದರ್ಶನ ಪಡೆಯುತ್ತಿದ್ದರು. ಚಾಮುಂಡಿ ನಮ್ಮ ನಾಡದೇವತೆ ಎಂದು ಅಭಿಮಾನದಿಂದಲೇ ಹೇಳುತ್ತಿದ್ದರು. ಅಂಥ ಕೆಲವು ಗುಂಪುಗಳನ್ನು ವರ್ಷಕ್ಕೆ ನಾಲ್ಕಾರು ಬಾರಿಯಾದರೂ ನೋಡುತ್ತಿದ್ದೆ. ಆದರೆ, ಕೋವಿಡ್ ಬಂದ ನಂತರ ಅಂಥ ಭಕ್ತರು ಬಂದಿರುವುದು ಬಹಳ ಕಡಿಮೆ’ ಎಂದರು.