ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ಪಾರಂಪರಿಕ ನಗರಿ ಮೈಸೂರು ವಿಶ್ವದಲ್ಲೇ ಹೆಸರು ಮಾಡಿದೆ. ಆದರೆ ಇಲ್ಲಿನ ಹಲವು ಪಾರಂಪರಿಕ ಕಟ್ಟಡಗಳು ಸೂಕ್ತ ನಿರ್ವಹಣೆಯಿಲ್ಲದೆ ಕುಸಿದು ಬೀಳುತ್ತಿವೆ. ಇಂತಹ ಕಟ್ಟಡಗಳ ಸಂರಕ್ಷಣೆಯತ್ತ ಮುಖ್ಯಮಂತ್ರಿ ಗಮನ ಹರಿಸಲಿ. ಮೊದಲು ದೇವರಾಜ ಮಾರುಕಟ್ಟೆಯಲ್ಲಿ ವಾಸ್ತವ್ಯ ಮಾಡಲಿ. ನಾನೂ ಅವರ ಜತೆ ವಾಸ್ತವ್ಯ ಮಾಡುತ್ತೇನೆ’ ಎಂದರು.