ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ‘ಈ ಕಾಲಘಟ್ಟ ಸ್ಪರ್ಧಾತ್ಮಕವಾದದ್ದು. ಯಾವುದೇ ನೌಕರಿಗೆ ಹೋಗಬೇಕಾದರೂ ತೀವ್ರ ಪೈಪೋಟಿ ಇದ್ದೇ ಇರುತ್ತದೆ. ಗುರಿ ಮತ್ತು ದಾರಿ ಸ್ಪಷ್ಟಪಡಿಕೊಂಡು ಮುಂದಡಿ ಇಡಬೇಕು. ಓದಿದ್ದನ್ನು ಮನನ ಮಾಡಿಕೊಂಡು, ಆಗಾಗ ಪುನರಾವಲೋಕಿಸುವುದರಿಂದ ಅದು ನೆನಪಿನಲ್ಲಿ ಉಳಿಯುತ್ತದೆ’ ಎಂದು ಕಿವಿಮಾತು ಹೇಳಿದರು.