ಸಚಿವ ಕೆ.ಎಸ್.ಈಶ್ವರಪ್ಪ ಶಾಸಕರ ಬೇಡಿಕೆಗೆ ಸ್ಪಂದಿಸಿರಲಿಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ, ‘ಇದು ಒಬ್ಬ ಸಚಿವರಿಗೆ ಸಂಬಂಧಿಸಿದ್ದಲ್ಲ. ಸಚಿವ ಸಂಪುಟದಲ್ಲಿರುವ ಎಲ್ಲರಿಗೂ ಅನ್ವಯಿಸಲಿದೆ. ಇದೂವರೆಗೂ ಮುಖ್ಯಮಂತ್ರಿಯಾಗಲಿ, ಅವರ ಮಗ ವಿಜಯೇಂದ್ರನಾಗಲಿ ನನ್ನ ಉಸ್ತುವಾರಿಯಿರುವ ಮೈಸೂರು ಜಿಲ್ಲೆ ಹಾಗೂ ಸಹಕಾರ ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ’ ಎಂದು ಸೋಮಶೇಖರ್ ಉತ್ತರಿಸಿದರು.