‘ಪ್ರಚೋದನಕಾರಿ ಹೇಳಿಕೆ ನೀಡುವವರು ಹೆಚ್ಚಾಗಿದ್ದಾರೆ. ಗುಂಡಿಕ್ಕುತ್ತೇನೆ, ನಾಲಿಗೆ ಸೀಳುತ್ತೇನೆ ಎಂಬುವರನ್ನು ತಿದ್ದಲು ಆಗುವುದಿಲ್ಲ. ಸಂವಿಧಾನವು ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಸಮುದಾಯವನ್ನು ಗುರಿಯಾಗಿಸಿ ನೋಯಿಸುವುದು, ಕೆಣಕುವುದು ಸರಿಯಲ್ಲ. ಭಾರತಾಂಬೆ ಮಕ್ಕಳಾಗಿ ಸಂವಿಧಾನ ಪಾಲಿಸಬೇಕು’ ಎಂದು ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದರು.