ಗುರುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿ, ‘ಜನವರಿಯಲ್ಲಿ ಪಾದಯಾತ್ರೆ ಮೂಲಕ ಕೋವಿಡ್ ಹಬ್ಬಿಸಿದ್ದ ಅವರು ಈಗ ಮತ್ತೆ ಶುರು ಮಾಡಿದ್ದಾರೆ. ಯುದ್ಧಭೂಮಿಯಲ್ಲಿ ಸಂಕಷ್ಟದಲ್ಲಿರುವ ಭಾರತೀಯರು ಇವರ ನೆನಪಿಗೆ ಬರುತ್ತಿಲ್ಲ. ಪಾದಯಾತ್ರೆ ಹೆಸರಲ್ಲಿ ಒಬ್ಬಟ್ಟು ಊಟ, ದಾರಿಯುದ್ದಕ್ಕೂ ಎಳನೀರು, ಪಾಯಸ, ಮಜ್ಜಿಗೆ, ಡೋಲು, ತಮಟೆ, ಸಿದ್ದರಾಮಯ್ಯ ಅವರ ನೃತ್ಯ... ಹೀಗೆ ನೋವಿನ ನಡುವೆಯೂ ಸಂಭ್ರಮಿಸುತ್ತಿದ್ದಾರೆ’ ಎಂದು ಟೀಕಿಸಿದರು.