ಮೈಸೂರು: ಶಾಸಕ ತನ್ವೀರ್ಸೇಠ್ ಮೇಲೆ ಈಚೆಗೆ ನಡೆದ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ ಮತಿನ್ಬೇಗ್ (45) ಎಂಬ ಆರೋಪಿಯನ್ನು ವಿಶೇಷ ತನಿಖಾ ತಂಡ ಶನಿವಾರ ಬಂಧಿಸಿದೆ. ಇಲ್ಲಿಗೆ ಬಂಧಿತರ ಸಂಖ್ಯೆ 8ಕ್ಕೆ ಏರಿದೆ.
ಹತ್ಯೆಗೆ ಯತ್ನಿಸಿದ ದಿನವೇ ಫರ್ಹಾನ್ ಪಾಷಾ (25) ಎಂಬ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಅಕ್ರಂ, ಅಬೀದ್ ಪಾಷಾ, ನೂರ್ಖಾನ್, ಮುಜೀಬ್, ಮುಜಾಮಿಲ್ ಮತ್ತು ಇರ್ಫಾನ್ ಅವರನ್ನು ಬಂಧಿಸಿದ್ದರು.
ಅಪಘಾತ;
ಇಲ್ಲಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಸ್ಕೂಟರ್ನಲ್ಲಿ ಬೆಲವತ್ತ ಕಡೆಯಿಂದ ಬರುತ್ತಿದ್ದ ಅಸದ್ಪಾಷಾ (65) ಅವರು ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದ ಕಾಂಕ್ರೀಟ್ ರಸ್ತೆ ವಿಭಜಕದ ಅಂಚಿಗೆ ಡಿಕ್ಕಿ ಹೊಡೆದು, ತಲೆಗೆ ಪೆಟ್ಟಾಗಿ ಮೃತಪಟ್ಟಿದ್ದಾರೆ. ಎನ್.ಆರ್.ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.