ಮೈಸೂರು: ಕೊರೊನಾ ಸೋಂಕು ತಡೆಯಲು ಸುಪ್ರೀಂಕೋರ್ಟ್ ನೀಡಿದ ಆದೇಶದನ್ವಯ ಇಲ್ಲಿನ ಕೇಂದ್ರ ಕಾರಾಗೃಹದಿಂದ 46 ಮಂದಿ ಕೈದಿಗಳನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.
ಇವರಲ್ಲಿ 30 ಮಂದಿ ವಿಚಾರಣಾಧೀನ ಕೈದಿಗಳಿದ್ದರೆ, ಇನ್ನುಳಿದ 16 ಮಂದಿ ಜೀವನಾಂಶ ಪಾವತಿಸಲು ಸಾಧ್ಯವಾಗದ ಕೈದಿಗಳಿದ್ದಾರೆ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.