ಬೆಟ್ಟದಪುರ: ಸಮೀಪದ ಚನ್ನಕೇಶವಪುರ ಗ್ರಾಮದಲ್ಲಿ ಶನಿವಾರ ಮುಂಜಾನೆ ಉಳುಮೆ ಮಾಡುವಾಗ ಟ್ರಾಕ್ಟರ್ ಮಗುಚಿಬಿದ್ದ ಪರಿಣಾಮ ಯುವಕ ಕೆ.ಬಿ.ಪ್ರವೀಣ್ (21) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಣಸೂರು ಗ್ರಾಮ ಕೆ.ಬಿ.ಪ್ರವೀಣ್ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ.ಎ ವ್ಯಾಸಂಗ ಮಾಡುತ್ತಿದ್ದ.
ಚನ್ನಕೇಶವಪುರ ಗ್ರಾಮದ ಗದ್ದೆಯಲ್ಲಿ ಶುಂಠಿ ಬೆಳೆಯಲು ಭೂಮಿ ಹದ ಮಾಡುವಾಗ ಗದ್ದೆ ಅಂಚಿಗೆ ಹೋದ ಟ್ರಾಕ್ಟರ್ ನೀರು ಹರಿಯುವ ಕೊಲ್ಲಿಗೆ ಮಗುಚಿ ಬಿದ್ದಿದೆ. ಟ್ರಾಕ್ಟರ್ ಅಡಿಗೆ ಸಿಲುಕಿದ ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಸಂಬಂಧ ಪ್ರವೀಣ್ ತಂದೆ ಬಸವರಾಜು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.