ಕೆಂಡನಕೊಪ್ಪಲು ಗ್ರಾಮದ ಬಳಿ ಹರಿಯುವ ಕಾವೇರಿ ನದಿಯಲ್ಲಿ ರಾಜು, ಕುಮಾರ ಮತ್ತು ಶೀನ ಎಂಬುವವರು ಯಾವುದೇ ರಹದಾರಿ ಪಡೆಯದೇ ಮರಳು ತೆಗೆಯುತ್ತಿದ್ದರು. ಯಡತೊರೆ ಗ್ರಾಮ ಬಳಿ ಹರಿಯುವ ಕಾವೇರಿ ನದಿಯಲ್ಲಿ ದೊರೆ, ತೇಜು ಮತ್ತು ರಾಜು ಎಂಬುವವರು ಮರಳು ತೆಗೆಯುತ್ತಿದ್ದರು. ಇವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ತಿ.ನರಸೀಪುರ ಠಾಣೆಯಲ್ಲಿ ದಾಖಲಾಗಿದೆ.