ಮಾರ್ಚ್ ತಿಂಗಳಿನಲ್ಲಿ ವಿದ್ಯಾರಣ್ಯ ಪುರಂ ಬಳಿಯ ಮುನಿಸ್ವಾಮಿನಗರದ 8ನೇ ಕ್ರಾಸ್ನಲ್ಲಿ ಕೆ.ಆರ್.ಉಪವಿಭಾಗದ ಪೊಲೀಸರು ಪುಂಡರಿಗೆ ಬಿಸಿ ಮುಟ್ಟಿಸಿದ್ದರು. ನಡೆದು ಹೋಗುತ್ತಿದ್ದ ಯುವತಿಯೊಬ್ಬರನ್ನು ಆಟೊದಲ್ಲಿ ಬಂದ ನಾಲ್ವರು ಯುವಕರು ಅಡ್ಡಗಟ್ಟಿ ಕೈ ಹಿಡಿದು ಎಳೆದಾಡಿದ್ದರು. ನಿತ್ಯ ನಡೆಯುತ್ತಿದ್ದ ಇಂತಹ ಕೃತ್ಯಗಳಿಂದ ರೋಸಿ ಹೋದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಕೊನೆಗೆ, ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದರು.