ನಂತರ, ನಡೆದ ವಿದ್ಯಾಭೂಷಣ ಅವರ ಹರಿದಾಸ ಕೀರ್ತನೆಗಳ ಗಾಯನ ‘ರಾಗತಾಳಮೇಳ’ ಭಕ್ತಿರಸವನ್ನು ಉಕ್ಕೇರಿಸಿತು. ಇವರು ಕನಕದಾಸರ ಕೀರ್ತನೆಯೊಂದಿಗೆ ಹಾಡಲು ಶುರುವಿಟ್ಟರು. ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ, ಕಮ್ಮಗೋಲನ ವೈರಿಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೆ’ ಎಂಬ ಹಾಡು ಮನಸೂರೆಗೊಂಡಿತು. ‘ಲೇಸಾಗಿ ಸುಜನರ ಸಲಹುವ ನೆಲೆಯಾದಿ ಕೇಶವನ ದಾಸ ಕಾಣೆ ಅಮ್ಮಯ್ಯ’ ಎಂಬ ಅಂತಿಮ ಸಾಲೂ ಮನಗೆದ್ದಿತು. ಇವರು ಹಾಡಿದ ‘ಮುರಳಿಯ ನಾದವ ಕೇಳಿ ಬನ್ನಿ, ಮಧುರನಾಥನು ಮುರಳಿಯನೂದಲು, ಸುರಿವುದಾನಂದ ಜಲ...’ ಹಾಡೂ ಮನಸೂರೆಗೊಂಡಿತು.