‘ಜನಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಯಾವ ರೀತಿ ನಡೆದುಕೊಳ್ಳಬೇಕು, ಜಿಲ್ಲಾಧಿಕಾರಿಗೆ ಜನಪ್ರತಿನಿಧಿಗಳು ಯಾವ ರೀತಿ ಗೌರವ ಕೊಡಬೇಕು ಎಂಬ ವಿಚಾರವಾಗಿ ತಿಳಿ ಹೇಳಿದ್ದೇನೆ. ಜಿಲ್ಲಾಧಿಕಾರಿಯಾಗಿ ಅಭಿವೃದ್ಧಿ ಕೆಲಸ ಮಾಡುತ್ತಾ, ಜನರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದೊಂದಿಗೆ ಕೆಲಸ ಮಾಡಬೇಕು. ಸ್ಪಂದನ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನಿಸದೇ ಇರುವುದು, ಗೌರವ ಕೊಡದೇ ಇರುವ ದೂರುಗಳು ಬಂದಿವೆ. ಹೀಗಾಗಿ, ಶಿಷ್ಟಾಚಾರದಂತೆ ಶಾಸಕರಿಗೆ ಸಮಯ ನೀಡಿ, ಆಹ್ವಾನಿಸಿ ಗೌರವ ನೀಡಬೇಕು’ ಎಂದರು.