ಸೆ. 15ರಂದು ಬೆಳಿಗ್ಗೆ 10.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ಪ್ರಧಾನ ಕವಿಗೋಷ್ಠಿ ನಡೆಯಲಿದೆ. ಕವಯತ್ರಿ ಸುಕನ್ಯಾ ಮಾರುತಿ ಅಧ್ಯಕ್ಷತೆವಹಿಸುವರು. ಕನ್ನಡದ ಕವಿಗಳಿಗೆ ಆದ್ಯತೆ ಇದೆ. ಕೊಡವ, ತುಳು, ಅರಭಾಷೆ, ಕೊಂಕಣಿ, ಸಂಸ್ಕೃತ, ಹಿಂದಿ ಹಾಗೂ ಉರ್ದು ಭಾಷೆಯ ತಲಾ ಒಬ್ಬೊಬ್ಬರು ಕವಿಗಳು ಕವಿತೆ ವಾಚನ ಮಾಡಲಿದ್ದಾರೆ. ಸಾಹಿತಿ ಪ್ರೊ.ಶ್ರೀಕಂಠ ಕೂಡಿಗೆ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.