‘ಅನಂತಪದ್ಮನಾಭ ನಿಲಯ’ ಎಂಬ ಹೆಸರಿನ ಈ ಮನೆಯ ಆವರಣದಲ್ಲಿ ಪೊಲೀಸರು ಬಂದಾಗ ನೀರವ ಮೌನ ನೆಲೆಸಿತ್ತು. ಇನ್ಸ್ಪೆಕ್ಟರ್ ಎಚ್.ಆರ್.ಬಾಲಕೃಷ್ಣ ಅವರ ನೇತೃತ್ವದ ವಿಶೇಷ ಪೊಲೀಸ್ ತನಿಖಾ ತಂಡವು ಬೀಗ ಒಡೆದು ಅರ್ಧ ಗಂಟೆ ಕಾಲ ಮನೆಯನ್ನು ಜಾಲಾಡಿತು. ಇವೆಲ್ಲವೂ ಒಂದು ರೀತಿಯ ವಿಲಕ್ಷಣ ಪ್ರಸಂಗದಂತೆ ಬಡಾವಣೆಯ ನಿವಾಸಿಗಳಿಗೆ ಕಂಡಿತು.