ಇವರು ಕಳೆದ 55 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಶ್ರೀ ರಾಜೇಶ್ವರಿ ವಸ್ತ್ರಾಲಂಕಾರ ನೀಡುವ ‘ರಂಗದಸರಾ’ ಪ್ರಶಸ್ತಿ, ಕರ್ನಾಟಕ ರಂಗಪರಿಷತ್ತು ಕೊಡಮಾಡುವ ಕನ್ನಡಾಂಬೆ ಕಲಾ ಥಯೇಟರಿಸ್ಟ್ ಪ್ರಶಸ್ತಿಗೆ ಇವರು ಪಾತ್ರರಾಗಿದ್ದರು. ಮೈಸೂರು ಜಿಲ್ಲಾ ಕನ್ನಡ ವೃತ್ತಿರಂಗಭೂಮಿ ಕಲಾವಿದೆಯರ ಸಂಘದ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದರು.