ಭಾನುವಾರ ಏಕಾಂಗಿ ಪ್ರತಿಭಟನೆ ನಡೆಸಿದ ನಾಗರಾಜ್, ‘ರಾಜ್ಯದಲ್ಲಿ ಪಕ್ಷಾಂತರಿಗಳ ಹಾವಳಿ ಹೆಚ್ಚಾಗಿದೆ. ಪಕ್ಷಾಂತರಿಗಳು ಶ್ವಾನಕ್ಕಿಂತ ಕಡೆ. ಅಲ್ಲದೇ, ಪಕ್ಷಾಂತರ ಈಗ ದಂದೆಯಾಗಿದೆ. ಇದು ಸಂವಿಧಾನ ಹಾಗೂ ಜನರಿಗೆ ಮಾಡುವ ಅಪಚಾರ. ಇದರಿಂದ ಆಡಳಿತಾಂಗ ದುರ್ಬಲವಾಗುತ್ತದೆ. ಹಾಗಾಗಿ, ಕೂಡಲೇ ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ತರಬೇಕು. ಪಕ್ಷಾಂತರಿಗಳು ಜೀವನ ಪರ್ಯಂತ ಚುನಾವಣೆಗೆ ನಿಲ್ಲದಂತೆ ಮಾಡಬೇಕು. 10 ವರ್ಷ ಪಕ್ಷದಿಂದ ವಜಾ ಮಾಡಬೇಕು’ ಎಂದು ಕೋರಿದರು.