‘ಪ್ರಸ್ತುತ ಕಾಡಾಕ್ಕೆ ₹ 10 ಕೋಟಿ ಅನುದಾನ ಬಂದಿದೆ. ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಆಗಿರುವುದರಿಂದ ತ್ವರಿತಗತಿಯಲ್ಲಿ ಕೆಲಸ ಮಾಡಬೇಕಿದೆ. ರೈತರು ಸಂಚರಿಸುವ ರಸ್ತೆಗಳು, ಎತ್ತಿನಗಾಡಿಗಳು ಓಡಾಡುವ ರಸ್ತೆಗಳು ಕಾಡಾ ವ್ಯಾಪ್ತಿಗೆ ಬರುತ್ತವೆ. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ಕಾಲುವೆಗಳು ಒಳಪಡುತ್ತವೆ. ನೀರು ಬಳಕೆದಾರರ ಸಂಘದೊಡನೆ ಸಮನ್ವಯ ಸಾಧಿಸಿ ಚಟುವಟಿಕೆಗಳನ್ನು ನಡೆಸಲಾಗುವುದು’ ಎಂದರು.