ಸ್ಥಳೀಯರಿಗೆ ಟಿಕೆಟ್: ‘ಹುಣಸೂರು ಉಪ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಲಾಗುವುದು. ಪ್ರಜ್ವಲ್ ಈಗಾಗಲೇ ಸಂಸದನಿದ್ದಾನೆ. ನಿಖಿಲ್ ಸ್ಪರ್ಧಿಸಲ್ಲ. ಈ ಬಾರಿ ಹೊರಗಿನವರನ್ನು ಕರೆತರಲ್ಲ. ಆಕಾಂಕ್ಷಿಗಳು, ಕಾರ್ಯಕರ್ತರ ಸಭೆ ನಡೆಸಿ, ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಲಾಗುವುದು’ ಎಂದು ಎಚ್.ಡಿ.ದೇವೇಗೌಡ ಪುನರುಚ್ಚರಿಸಿದರು.