‘ಜೈಲಿನಲ್ಲಿದ್ದಾಗ ನಾನು ಧರಿಸಿದ್ದ ರುದ್ರಾಕ್ಷಿ, ದೇವರ ದಾರ ತೆಗೆಸಿದ್ದರು. ಯಾರ ಜೊತೆಗೂ ಮಾತನಾಡಲು ಅವಕಾಶವಿರಲಿಲ್ಲ. ನನ್ನ ಹೆಂಡತಿ ಜೊತೆ ಮಾತನಾಡುತ್ತಿದ್ದೆ. ‘ಜೈಲಿನಲ್ಲಿರುವ ಮಣ್ಣನ್ನು ತಲೆಯ ಮೇಲೆ ಹಾಕಿಕೊಂಡು, ಸಂಕಷ್ಟ ಪರಿಹರಿಸುವಂತೆ
ಶ್ರೀಕಂಠೇಶ್ವರ ಸ್ವಾಮಿಯಲ್ಲಿ ಹರಕೆ ಮಾಡಿಕೊಳ್ಳುವಂತೆ ಹಿರಿಯರೊಬ್ಬರು ಹೇಳಿದ್ದಾರೆ’ ಎಂಬುದಾಗಿ ತಿಳಿಸಿದಳು. ಹಾಗೆ ಮಾಡಿ ನಿತ್ಯ ಶ್ರೀಕಂಠೇಶ್ವರನನ್ನು ಸ್ಮರಿಸುತ್ತಿದ್ದೆ. ಜೈಲಿನಲ್ಲಿರುವ ಈಶ್ವರನ ಗುಡಿಗೂ ಭೇಟಿ ನೀಡುತ್ತಿದ್ದೆ’ ಎಂದು ಶಿವಕುಮಾರ್ ಹೇಳಿದರು.