ಇತ್ತ ಅಪಘಾತದಲ್ಲಿ ಪುತ್ರಿಯನ್ನು ಕಳೆದುಕೊಂಡ ಗುಂಡ್ಲುಪೇಟೆ ತಾಲ್ಲೂಕಿನ ಹುಲ್ಲೇಹಳ್ಳಿಯ ಶಿವಯ್ಯ ಅವರಿಗೆ ದಿಕ್ಕೇ ತೋಚದಂತಾಗಿದೆ. ಪತ್ನಿಯನ್ನು ಕಳೆದುಕೊಂಡಿದ್ದ ಇವರು ಮೊದಲ ಪುತ್ರಿಗೆ ಮದುವೆ ಮಾಡಿದ್ದರು. ಎರಡನೇ ಪುತ್ರಿಯಾದ ಅಶ್ವಿನಿಯನ್ನು ಮೈಸೂರಿನಲ್ಲಿ ಹಾಸ್ಟೆಲ್ನಲ್ಲಿರಿಸಿ ಓದಿಸುತ್ತಿದ್ದರು. ಪುತ್ರಿಯ ಮೇಲೆ ಅತಿಯಾದ ಮಮಕಾರ ಇಟ್ಟುಕೊಂಡಿದ್ದರು. ಪುತ್ರಿ ಸಾವಿನಿಂದ ಶಿವಯ್ಯ ಅವರು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.