‘ಹಣ, ಹೆಂಡ, ಸೀರೆ, ಪಂಚೆ, ಬಾಡೂಟಕ್ಕೆ ಮತವನ್ನು ಮಾರಿ ಕೊಳ್ಳುವ ಪ್ರವೃತ್ತಿ ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈ ಅಸಂಬದ್ಧಗಳು ಹೆಚ್ಚಾಗಿ ನಡೆಯುತ್ತಿವೆ. ಅದನ್ನು ಸಾಧ್ಯ ವಾದಷ್ಟು ತಡೆಯಲು, ಮತದಾರರ ಜವಾಬ್ದಾರಿಯನ್ನು ತಿಳಿಸಿಕೊಡಲು ಸಮರ್ಪಣಾ ಟ್ರಸ್ಟ್ನಿಂದ ಜಾಗೃತಿ ಮೂಡಿಸುತ್ತಿದ್ದೇವೆ. ಜನರು ಕ್ಷಣಿಕ ತೃಪ್ತಿಗೆ ತಮ್ಮ ಮತ ಮಾರಿಕೊಳ್ಳಬಾರದು’ ಎಂದು ಜಯಶಂಕರ್ ಹೇಳುತ್ತಾರೆ.