‘ಕಳೆದ 11 ವರ್ಷಗಳಿಂದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಿರೀಶ್, ವಿದ್ಯಾನಗರದ ತನ್ನ ನಿವಾಸದಲ್ಲಿ ಖಾಲಿಯಾದ ರೆಮ್ಡಿಸಿವಿರ್ನ ಬಾಟಲಿಗಳಿಗೆ ನಕಲಿ ಔಷಧ ತುಂಬಿಸುತ್ತಿದ್ದ. ಈತನಿಗೆ ಪ್ರಮುಖಆಸ್ಪತ್ರೆಯ ಭದ್ರತಾ ಸಿಬ್ಬಂದಿ ಶಿವಪ್ಪ ಹಾಗೂ ಪ್ರಮುಖಕೋವಿಡ್ ಕೇರ್ ಸೆಂಟರ್ನ ಸ್ವೀಪರ್ ಮಂಗಳಾ ಅವರು ಬಳಸಿ ಎಸೆದ ರೆಮ್ಡಿಸಿವಿರ್ನ ಅಸಲಿ ಬಾಟಲಿಗಳನ್ನು ಪೂರೈಕೆ ಮಾಡುತ್ತಿದ್ದರು. ಈ ಬಾಟಲಿಗಳಿಗೆ ನಕಲಿ ಔಷಧ ತುಂಬಿಸಿದ ನಂತರ ಗಿರೀಶ್, ವಿವಿಧ ಔಷಧ ಕಂಪನಿಗಳ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮತ್ತು ಮಂಜುನಾಥ್ ಅವರಿಗೆ ನೀಡಿ ಬೇಡಿಕೆ ಇದ್ದ ಕಡೆಗೆ ಪೂರೈಕೆ ಮಾಡುತ್ತಿದ್ದ’ ಎಂದು ಮಾಹಿತಿ ನೀಡಿದರು.