ರೈಲ್ವೆ ಬ್ಯಾರಿಕೇಡ್ ಮುರಿದು ನಾಗಪುರ ಆರನೇ ಘಟಕದ ಹತ್ತಿರ ಹಾಡಿಗೆ ನುಗ್ಗಿದೆ. ಹಾಡಿ ಜನರು ಆನೆಯನ್ನು ಓಡಿಸಿದ್ದಾರೆ. ನಂತರ ಗಿರೀಶ್, ಶಶಿಕಲಾ ರಾಮಣ್ಣ ಅವರ ಜಮೀನಿನಲ್ಲಿ ಶುಂಠಿ, ಕುಂಬಳ ಬೆಳೆಗಳನ್ನು ತುಳಿದು ನಾಶಪಡಿಸಿದೆ. ಬಳಿಕ, ವೀರನಹೊಸಹಳ್ಳಿ ಗ್ರಾಮದ ಚೌಡಮ್ಮ ಅವರ ಕೊಟ್ಟಿಗೆ ಮತ್ತು ಮನೆಗೆ ಹಾನಿ ಮಾಡಿದೆ. ಕೊಟ್ಟಿಗೆಯಲ್ಲಿ ಕಟ್ಟಿದ ಹಸುವಿಗೆ ಗಾಯಗಳಾಗಿವೆ. ನಂತರ ಅರಣ್ಯ ಇಲಾಖೆಯ ವಸತಿಗೃಹದ ಕಾಂಪೌಂಡ್ ಮತ್ತು ಚಾವಣಿಗೆ ಹಾನಿ ಮಾಡಿದೆ.