ಒಟ್ಟು ಮೂರು ಆನೆಗಳು ಹೆಡಿಯಾಲ ಅರಣ್ಯದಿಂದ ಚಿಕ್ಕದೇವಮ್ಮನ ಬೆಟ್ಟದಿಂದ ಇಲ್ಲಿಗೆ ಬಂದಿದ್ದು, ಇಲ್ಲಿನ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದ ಪಕ್ಕದಲ್ಲಿ ವಾಯುವಿಹಾರಿಗಳ ಗಮನಕ್ಕೆ ಬಂದಿದೆ. ನಂತರ, ಎರಡು ಆನೆಗಳು ಮೈಸೂರಿಗೆ 28 ಕಿ.ಮೀ ದೂರದಲ್ಲಿರುವ ಮಹೇಶ್ವರಬೆಟ್ಟದಲ್ಲಿ ಬೀಡುಬಿಟ್ಟಿವೆ. ಆದರೆ, ಒಂದು ಆನೆ ಹಿಂಡಿನಿಂದ ಬೇರ್ಪಟ್ಟು ಸುತ್ತಮುತ್ತಲ ಜಮೀನುಗಳಿಗೆ ನುಗ್ಗಿ ದಾಂದಲೆ ನಡೆಸಿದೆ. ಬಾಳೆ ಮತ್ತು ತೊಗರಿಯನ್ನು ಸಾಕಷ್ಟು ಪ್ರಮಾಣದಲ್ಲಿ ಇದು ತಿಂದು ಹಾಕಿದೆ.