‘ಅತ್ಯಂತ ಕಡಿಮೆ ಮಕ್ಕಳಿರುವ ಕೃಷ್ಣರಾಜ ಸರ್ಕಾರಿ ಶಾಲೆಯಲ್ಲಿ 30 ಮಕ್ಕಳು, ಲಕ್ಷ್ಮೀಪುರಂ 40, ಕನ್ನೇಗೌಡನಕೊಪ್ಪಲು 43, ಕುಕ್ಕರಹಳ್ಳಿ ಸರ್ಕಾರಿ ಶಾಲೆಯಲ್ಲಿ 30 ಮಕ್ಕಳಿದ್ದಾರೆ. ಈ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಶುರು ಮಾಡಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿದ್ದರೆ ಅದು ಸರ್ಕಾರದ ಸಾಧನೆಯಾಗಿರುತ್ತಿತ್ತು. ಹಾಗಾಗಿ, ಇದು ಸಾಧನೆಯೇ ಅಲ್ಲ’ ಎಂದು ಕನ್ನಡ ಕ್ರಿಯಾ ಸಮಿತಿಯ ಕಾರ್ಯದರ್ಶಿ ಸ.ರ.ಸುದರ್ಶನ ‘ಪ್ರಜಾವಾಣಿ’ಗೆ ತಿಳಿಸಿದರು.