ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ನಡೆದ ‘ಮಾತೃ ಭಾಷಾ ದಿನಾಚರಣೆ’ಯಲ್ಲಿ ಮಾತನಾಡಿದ ಅವರು ‘ಭಾಷೆಗಳನ್ನಾಡುವವರು ಭ್ರಾತೃತ್ವದಿಂದ ನಡೆದುಕೊಳ್ಳಬೇಕು. ಪ್ರಾದೇಶಿಕ ಐತಿಹ್ಯ, ಮಹಾತ್ಮರ ಚರಿತ್ರೆ, ಪರಂಪರೆ, ಭಾಷಾ ವಿಶೇಷತೆ ಆಯಾ ಪ್ರದೇಶದ ವೈಶಿಷ್ಟ್ಯವಾಗಿವೆ. ಇವುಗಳು ಆಯಾ ಪ್ರದೇಶದ ಮಾತೃಭಾಷೆಯ ಮೂಲಕವೇ ಲಭ್ಯವಾಗುತ್ತವೆ. ಎಲ್ಲಾ ಭಾಷೆಗಳಿಗೂ ಆದ್ಯತೆ ನೀಡಿ, ಬಳಸಿ–ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.