‘ಶಾಸಕ ಮಹೇಶ್, ಗಾಂಧಿ-ಅಂಬೇಡ್ಕರ್ ಸಿದ್ಧಾಂತಗಳ ಕಸಿಯಾಗಬೇಕು ಎಂದು ಈಚೆಗೆ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ನಿಲುವಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್, ಬುದ್ಧ, ಕಾನ್ಶಿರಾಮ್, ಮಾಯಾವತಿಯವರ ತತ್ವ ಸಿದ್ಧಾಂತ ಎಲ್ಲಿ ಹೋದವು. ಬಿಎಸ್ಪಿ ಸಂಘಟನೆಯ ಆರಂಭದ ದಿನದಿಂದಲೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ಬೈದುಕೊಂಡು, ವಿರೋಧಿಸಿಕೊಂಡೇ ಹೋರಾಟ ಮಾಡಿದವರು. ಇದೀಗ ಓಲೈಕೆಗೆ ಮುಂದಾಗಿರುವುದು ಸರಿಯಲ್ಲ’ ಎಂದು ತಾಕೀತು ಮಾಡಿದರು.