ಸಂವಿಧಾನದ ಮೇಲೆ ಸವಾರಿ ಮಾಡಲಾಗುತ್ತಿದೆ. ನ್ಯಾಯಾಂಗದಲ್ಲೂ ಪಕ್ಷಪಾತ ನಡೆಯುತ್ತಿದೆ. ಮಾಧ್ಯಮಗಳು ಕಾರ್ಪೋರೆಟೀಕರಣಗೊಂಡಿವೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ವರದಿಗಳು ಪ್ರಕಟವಾಗುತ್ತಿವೆ. ಬುದ್ಧ, ಬಸವ, ಅಂಬೇಡ್ಕರ್ ಅರಿಯದ ಜನರು ಆಳ್ವಿಕೆ ನಡೆಸುತ್ತಿದ್ದು, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತುಂಬಾ ಅಪಾಯಕಾರಿಯಾದ ಸನ್ನಿವೇಶದಲ್ಲಿ ಭಾರತ ಇದೆ ಎಂದು ವಿಶ್ಲೇಷಿಸಿದರು.