‘ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಮಾದನಹಳ್ಳಿ ಗ್ರಾಮದ ಸರ್ವೇ ನಂಬರ್ 12/1, 12/2, 13/1ಎರಲ್ಲಿನ 1.20 ಎಕರೆ ಜಮೀನು ಸರ್ಕಾರದ ಆಸ್ತಿ. ಇದೇ ಗ್ರಾಮದ ಪರಶಿವಮೂರ್ತಿ, ಶಿವಣ್ಣ, ಮಲ್ಲಿಕಾರ್ಜುನ, ಬಸವರಾಜು, ಮಹದೇವಪ್ಪ ಎಂಬುವವರು ಗ್ರಾಮ ಪಂಚಾಯಿತಿಯ ಹಾಲಿ ಮತ್ತು ಮಾಜಿ ಸದಸ್ಯರಾಗಿದ್ದು, ರಾಜಕೀಯ ಬಲ ಮತ್ತು ಹಣ ಬಲ ಬಳಸಿ ಬಡವರಿಗೆ ಮನೆ ಕಟ್ಟಲು ನೀಡಿರುವ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ.’