ಸೋಮೇಶ್ ಅವರದ್ದು ಅವಿಭಕ್ತ ಕುಟುಂಬವಾಗಿದ್ದು, 3 ಎಕರೆ 18 ಗುಂಟೆ ಜಮೀನು ಹೊಂದಿದ್ದರು. ಇದರಲ್ಲಿ ತಂಬಾಕು ಬೆಳೆಯುತ್ತಿದ್ದರು. ಲೇವಾದೇವಿಗಾರರಿಂದ ₹5 ಲಕ್ಷ ಸಾಲ ಪಡೆದಿದ್ದರು. ಇದಕ್ಕಾಗಿ, ಲೇವಾದೇವಿಗಾರರಿಗೆ ಚೆಕ್ಗಳನ್ನು ನೀಡಿದ್ದರು. ಆದರೆ, ಸಕಾಲಕ್ಕೆ ಸಾಲ ತೀರಿಸದ ಕಾರಣ, ಲೇವಾದೇವಿಗಾರರು ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಒಂದು ಪ್ರಕರಣದಲ್ಲಿ ಸೋಮೇಶ್ ಜಾಮೀನು ಪಡೆದಿದ್ದರು. ಮತ್ತೊಂದು ಪ್ರಕರಣದಲ್ಲಿ ವಾರಂಟ್ ಜಾರಿಯಾಗಿತ್ತು.