ಬೆಟ್ಟದಪುರ (ಮೈಸೂರು): ಪಿರಿಯಾಪಟ್ಟಣ ತಾಲ್ಲೂಕಿನ ಅಡಗೂರು ಗ್ರಾಮದ ರೈತ ಕಿರಣ್ ಕುಮಾರ್ (31) ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ ಒಂದು ಎಕರೆ ಜಮೀನಿದ್ದು, ಶುಂಠಿ ಬೆಳೆಯುವುದಕ್ಕಾಗಿ ಬೇರೆಯವರಿಂದ ಒಂದು ಎಕರೆ ಇಪ್ಪತ್ತು ಗುಂಟೆ ಜಮೀನನ್ನು ಭೋಗ್ಯಕ್ಕೆ ಪಡೆದಿದ್ದರು. ವ್ಯವಸಾಯಕ್ಕೆಂದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂದು ತಾಯಿ ಭಾರತಿ ದೂರು ನೀಡಿದ್ದಾರೆ.