‘ರೈತ ಚಳವಳಿಗೆ ಹೊಸ ಸ್ವರೂಪ ನೀಡುವ ಚಿಂತನೆ ನಡೆದಿದೆ. ಬರಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ ತೊಡಲು ನಿರ್ಧರಿಸಲಾಗಿದ್ದು, ಜಲತಜ್ಞ ರಾಜೇಂದ್ರಸಿಂಗ್ ಅವರಿಂದಲೇ ಸಮಾವೇಶಕ್ಕೆ ಚಾಲನೆ ಕೊಡಿಸಲಾಗುತ್ತಿದೆ. ರೈತರ ಆರ್ಥಿಕ ಶಕ್ತಿ ಹೆಚ್ಚಿಸಲು ಯಾವ ಕ್ರಮ ತೆಗೆದುಕೊಳ್ಳಬೇಕು. ರೈತರು ಬೆಳೆದ ವಿವಿಧ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ಶಕ್ತಿ ತುಂಬಲು ಯೋಜಿಸಲಾಗಿದೆ. ಇದಕ್ಕಾಗಿಯೇ ಹೋರಾಟಗಾರರು, ಸಮಾಜಮುಖಿ ಚಿಂತಕರು, ಪರಿಣಿತರನ್ನೊಳಗೊಂಡ ಸಮಿತಿ ರಚಿಸಲಾಗಿದೆ’ ಎಂದು ಹೇಳಿದರು.