ರಸ್ತೆತಡೆ ಚಳವಳಿ ಕುರಿತು ಮೊದಲೇ ಮಾಹಿತಿ ಇದ್ದುದ್ದರಿಂದ ಪೊಲೀಸರು ಮೈಸೂರು– ನಂಜನಗೂಡು ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ರಿಂಗ್ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. 15 ನಿಮಿಷ ಕಳೆದರೂ ರೈತರು ಮಾನವ ಸರಪಳಿಯನ್ನು ನಡೆಸುವುದನ್ನು ಮುಂದುವರಿಸುವ ಮೂಲಕ ವಾಹನ ಸಂಚಾರಕ್ಕೆ ತಡೆ ಒಡ್ಡಿದರು. ಇದನ್ನು ಅರಿತ ಡಿಸಿಪಿ ಪ್ರಕಾಶ್ಗೌಡ ಸ್ಥಳಕ್ಕೆ ಬಂದು, ರೈತರನ್ನು ಮನವೊಲಿಸಿದರು. ಬಳಿಕ ರಸ್ತೆತಡೆ ಚಳವಳಿಯನ್ನು ವಾಪಸ್ ಪಡೆಯಲಾಯಿತು.